Home » ನಿರ್ಮಾಪಕರ ಆಕ್ರೋಶ: ತಮಿಳಿನ ಟಾಪ್ ಸ್ಟಾರ್ ನಟರಿಗೆ ರೆಡ್ ಕಾರ್ಡ್ !

ನಿರ್ಮಾಪಕರ ಆಕ್ರೋಶ: ತಮಿಳಿನ ಟಾಪ್ ಸ್ಟಾರ್ ನಟರಿಗೆ ರೆಡ್ ಕಾರ್ಡ್ !

by Suddi Mane
0 comment

ತಮಿಳು ಸಿನಿಮಾ ರಂಗದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಮತ್ತೊಮ್ಮೆ ಸುದ್ದಿಯಾಗಿದೆ. ಹೌದು, ಈಗ ತಮಿಳು ಸಿನಿಮಾ ರಂಗ ಅಥವಾ ಕಾಲಿವುಡ್ ನಲ್ಲಿ ನಟರು ಹಾಗೂ ನಿರ್ಮಾಪಕರ ಮಧ್ಯೆ ಬಹಿರಂಗ ಸಮರವೊಂದು ಆರಂಭವಾಗಿದ. ಸಂಭಾವನೆ, ನಟರ ಕಾಲ್ ಶೀಟ್ ವಿಚಾರಗಳಲ್ಲಿ ಇಷ್ಟು ದಿನ ಆಂತರಿಕವಾಗಿದ್ದ ಅಸಮಾಧಾನ ಈಗ ಬಹಿರಂಗವಾಗಿದೆ. ಜಗಳ ಈಗ ಇನ್ನೊಂದು ಹಂತವನ್ನು ತಲುಪಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿನಿಮಾ ನಿರ್ಮಾಪಕರು ಕೆಲವು ನಟರ ವಿರುದ್ಧ ಸಿಟ್ಟನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ಬೆಳವಣಿಗೆಗಳಲ್ಲಿ ತಮಿಳಿನ ಸ್ಟಾರ್ ನಟ ಧನುಷ್ ಸೇರಿದಂತೆ 14 ನಟರ ವಿರುದ್ಧವಾಗಿ ಶಿಸ್ತಿನ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಮಾಪಕರ ಸಂಘ ತೀರ್ಮಾನವನ್ನು ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ನಟರ ಸಂಘದಿಂದ ವಿವರಣೆಯನ್ನು ಕೇಳಲಾಗಿದೆ ಎನ್ನುವ ಸುದ್ದಿ ಈಗ ವೈರಲ್ ಆಗಿದ್ದು ಎಲ್ಲರಿಗೂ ಅಚ್ಚರಿ ಯನ್ನು ಮೂಡಿಸಿದೆ. ಇತ್ತೀಚಿಗೆ ತೇನಾಂಡಾಳ್ ಮುರಳಿ ನೇತೃತ್ವದ ಆಡಳಿತ ಮಂಡಳಿ ನಡೆಸಿದ ಒಂದಷ್ಟು ಮಹತ್ವದ ನಿರ್ಣಯಗಳನ್ನು ಮಾಡಲಾಗಿದೆ.

ಸಿನಿಮಾ ವಿಚಾರದಲ್ಲಿ ನಿರ್ಮಾಪಕರಿಗೆ ನಷ್ಟ ಉಂಟು ಮಾಡಿದಂತಹ ಅಥವಾ ಮುಂಗಡ ಹಣ (advance) ಪಡೆದುಕೊಂಡು ಅನಂತರ ಸಿನಿಮಾಕ್ಕೆ ಕಾಲ್ ಶೀಟ್ ನೀಡದ ನಟರಿಗೆ ರೆಡ್ ಕಾರ್ಡ್ ಹಾಕುವ ಕುರಿತಾಗಿ ಚರ್ಚೆಯನ್ನು ಮಾಡಲಾಗಿದೆ. ಇದರ ಮೊದಲ ಹಂತದಲ್ಲಿ ಸಿಂಬು, ವಿಶಾಲ್, ಎಸ್.ಜೆ.ಸೂರ್ಯ, ಯೋಗಿ ಬಾಬು ಮತ್ತು ಅಥರ್ವ ಅವರಿಗೆ ಸಹಕರಿಸದಿರಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಈ ಹಂತದಲ್ಲಿ ಹೆಸರುಗಳ ಪಟ್ಟಿಯನ್ನು ಈಗ 14 ಕ್ಕೆ ಹೆಚ್ಚಿಸಲಾಗಿದೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies