Home » ಇನ್ನು ಬಂದಿಲ್ಲ ಪ್ರೊಮೋ: ಈ ವೀಕೆಂಡ್ ನಲ್ಲಿ ಸಾಧಕರ ಕುರ್ಚಿಯಲ್ಲಿ ಕೂರುವವರು ಯಾರು?

ಇನ್ನು ಬಂದಿಲ್ಲ ಪ್ರೊಮೋ: ಈ ವೀಕೆಂಡ್ ನಲ್ಲಿ ಸಾಧಕರ ಕುರ್ಚಿಯಲ್ಲಿ ಕೂರುವವರು ಯಾರು?

by Suddi Mane
0 comment

ಕನ್ನಡ ಕಿರುತೆರೆಯ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ನ ಸೀಸನ್ ಐದು ಭರ್ಜರಿಯಾಗಿ ಮುಂದೆ ಸಾಗುತ್ತಿರುವ ವಿಚಾರ ಈಗಾಗಲೇ ಕಿರುತೆರೆಯ ಪ್ರೇಕ್ಷಕರಿಗೆ ಗೊತ್ತಿದೆ. ಬಹಳಷ್ಟು ಜನರು ವಾರಾಂತ್ಯದ ಎಪಿಸೋಡ್ ಗಳಿಗಾಗಿ ಕಾಯುವುದು ಸಹಾ ಸಾಮಾನ್ಯ. ವೀಕೆಂಡ್ ವಿತ್ ರಮೇಶ್ ನಲ್ಲಿ ಈಗಾಗಲೇ ಸಾಕಷ್ಟು ಜನ ಸಾಧಕರು ಸಾಧಕರ ಕುರ್ಚಿಯನ್ನೇರಿ ತಮ್ಮ ಜೀವನ ಮತ್ತು ಸಾಧನೆಯ ಕಥೆಯನ್ನು ಹೇಳಿದ್ದಾರೆ.‌ ಈ ಬಾರಿಯ ಸೀಸನ್ ಮೋಹಕ ತಾರೆ ರಮ್ಯ ಅವರ ಸಂಚಿಕೆಗಳ ಮೂಲಕ ಪ್ರಸಾರವನ್ನು ಆರಂಭಿಸಿತ್ತು.

ಅನಂತರದ ದಿನಗಳಲ್ಲಿ ಪ್ರಭುದೇವ, ಡಾಲಿ ಧನಂಜಯ್, ದತ್ತಣ್ಣ, ಡಾ. ಮಂಜುನಾಥ್, ಮಂಡ್ಯ ರಮೇಶ್, ಅವಿನಾಶ್, ಸಿಹಿ ಕಹಿ ಚಂದ್ರು, ನಾ ಸೋಮೇಶ್ವರ್, ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್, ನೆನಪಿರಲಿ ಪ್ರೇಮ್, ಮುಂತಾದವರು ಸಾಧಕರ ಕುರ್ಚಿಯಲ್ಲಿ ಕುಳಿತಾಗಿದೆ. ಕಳೆದ ವಾರ ಹಿರಿಯ ಸಾಹಿತಿ ದೊಡ್ಡರಂಗೇಗೌಡರ ಆಗಮನ ಪ್ರೇಕ್ಷಕರಿಗೆ ಬಹಳಷ್ಟು ಖುಷಿಯನ್ನು ನೀಡಿತ್ತು. ಆದರೆ ಇವೆಲ್ಲವುಗಳ ನಡುವೆಯೇ ಕಳೆದ ವಾರದಿಂದ ವಾಹಿನಿ ಪ್ರೇಕ್ಷಕರಿಗೆ ಮೊದಲೇ ಅತಿಥಿ ಯಾರೆನ್ನುವ ಸುಳಿವನ್ನು ಬೇಗ ನೀಡುತ್ತಿಲ್ಲ.

ಕಳೆದ ವಾರವೂ ಅಷ್ಟೇ, ಒಂದು ದಿನ ಮೊದಲಷ್ಟೇ ಈ ವಾರದ ಸಾಧಕರು ಯಾರು ಎನ್ನುವ ಸುಳಿವನ್ನು ನೀಡಿತ್ತು‌. ಆರಂಭದಲ್ಲಿ ಮೂರ್ನಾಲ್ಕು ದಿನಗಳ ಮೊದಲೇ ಪ್ರೊಮೋ ಮೂಲಕ ಈ ವಾರದ ಸಾಧಕರು ಯಾರು ಎನ್ನುವುದನ್ನು ತೋರಿಸುತ್ತಿದ್ದ ವಾಹಿನಿ ಈಗ ಅದನ್ನು ತೋರಿಸುತ್ತಿಲ್ಲ. ಇದರಿಂದಾಗಿ ಪ್ರೇಕ್ಷಕರು ಈ ವಾರ ಕಾರ್ಯಕ್ರಮ ಪ್ರಸಾರ ಆಗುತ್ತದೆಯೋ ಇಲ್ಲವೋ ಎನ್ನುವ ಅನುಮಾನವನ್ನು ಕೂಡಾ ವ್ಯಕ್ತಪಡಿಸಿದ್ದುಂಟು. ಅದೇ ರೀತಿ ಈ ವಾರ ಸಹಾ ಪ್ರೊಮೋ ಮೊದಲೇ ಪ್ರಸಾರವನ್ನು ಕಂಡಿಲ್ಲ. ಆದ್ದರಿಂದ ಪ್ರೇಕ್ಷಕರು ಈ ವಾರ ಸಾಧಕರ ಕುರ್ಚಿಯನ್ನು ಅಲಂಕರಿಸುವವರು ಯಾರು? ಎನ್ನುವುದನ್ನು ತಿಳಿಯಲು ಬಹಳ ಕಾತರರಾಗಿದ್ದಾರೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies