Home » ಸನ್ ಪಿಕ್ಚರ್ ಕೊಟ್ಟ ಹೊಸ ಸುದ್ದಿ: ಕೇಕ್ ಕತ್ತಿರಿಸಿ ಸಂಭ್ರಮಿಸಿದ ನಟ ರಜನೀಕಾಂತ್

ಸನ್ ಪಿಕ್ಚರ್ ಕೊಟ್ಟ ಹೊಸ ಸುದ್ದಿ: ಕೇಕ್ ಕತ್ತಿರಿಸಿ ಸಂಭ್ರಮಿಸಿದ ನಟ ರಜನೀಕಾಂತ್

by Suddi Mane
0 comment

ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಅವರು ತಮಿಳಿನಲ್ಲಿ ನಟ ರಜನೀಕಾಂತ್ ಅವರ 169 ನೇ ಸಿನಿಮಾ ಜೈಲರ್ ನಲ್ಲಿ ನಟಿಸುತ್ತಿರುವ ವಿಚಾರ ಈಗಾಗಲೇ ಎಲ್ಲರಿಗೂ ತಿಳಿದಿದೆ. ತಮಿಳಿನ ಜೈಲರ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ಒಂದು ಪ್ರಮುಖ ಪಾತ್ರಕ್ಕೆ ಬಣ್ಣವನ್ನು ಹಚ್ಚಿದ್ದಾರೆ. ಜೈಲರ್ ಸಿನಿಮಾದ ಚಿತ್ರೀಕರಣ ಆರಂಭವಾದಾಗಿನಿಂದಲೂ ಈ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದು, ಇದೀಗ ಸಿನಿಮಾ ಕುರಿತಾದ ಒಂದು ಹೊಸ ಅಪ್ಡೇಟ್ ಹೊರ ಬಂದಿದೆ.

ಹೌದು, ಜೈಲರ್ ಸಿನಿಮಾದ ಚಿತ್ರೀಕರಣ ಮುಗಿದಿದೆ. ಈ ಸಿನಿಮಾ ಬಹಳ‌ ವಿಶೇಷವಾಗಿದೆ. ಏಕೆಂದರೆ ಇದರಲ್ಲಿ ಕನ್ನಡದ ಮತ್ತು ತಮಿಳಿನ ಸ್ಟಾರ್ ನಟರು ಇದ್ದಾರೆ. ಅಲ್ಲದೇ ಈ ಸಿನಿಮಾದಲ್ಲಿ ದಕ್ಷಿಣದ ದಿಗ್ಗಜ ನಟರೊಂದಿಗೆ ಬಾಲಿವುಡ್ (Bollywood) ನಟರು ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಈ ಸಿನಿಮಾದ ಒಂದು ಝಲಕ್ ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಅಭಿಮಾನಿಗಳಿಗೆ ಅದು ಖುಷಿಯನ್ನು ನೀಡಿತ್ತು.

ಈಗ ಅದರ ಬೆನ್ನಲ್ಲೇ ಸಿನಿಮಾ ಶೂಟಿಂಗ್ ಮುಗಿದಿದ್ದು, ಚಿತ್ರತಂಡವು ಬಹಳ ಖುಷಿಯಿಂದ ಈ ಕ್ಷಣವನ್ನು ಸಂಭ್ರಮಿಸಿದೆ. ಜೈಲರ್ ಸಿನಿಮಾ ಪೂರ್ಣಗೊಂಡ ಮಾಹಿತಿಯನ್ನು ಸಿನಿಮಾ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ತನ್ನ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಫೋಟೋ ಸಹಿತ ಶೇರ್ ಮಾಡುತ್ತಾ,. ಶೂಟಿಂಗ್ ಮುಗಿದಿದೆ ಮತ್ತೆ ಥಿಯೇಟರ್ ನಲ್ಲಿ ಭೇಟಿಯಾಗೋಣ ಎಂದು ಪೋಸ್ಟ್ ಬರೆದುಕೊಂಡಿದೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies