ಪ್ರೊಮೋ ಬಂದು 6 ತಿಂಗಳಾದ್ರು ಸೀರಿಯಲ್ ಸುಳಿವಿಲ್ಲ! ಸೀತಾ ರಾಮ ಸೀರಿಯಲ್ ತಡ ಆಗ್ತಿರೋದ್ಯಾಕೆ?

ಪ್ರೋಮೋ ಪ್ರಸಾರ ಕಂಡು ಆರು ತಿಂಗಳಾಯ್ತು ಆದ್ರೂ ಸೀರಿಯಲ್ ನ ಸುದ್ದಿ ಸುಳಿವಿಲ್ಲ ಅನ್ನೋದು ಈ ಕಿರುತೆರೆಯ ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ.‌ ಹೌದು, ಅಗ್ನಿ ಸಾಕ್ಷಿ ಸೀರಿಯಲ್ ನ ಸನ್ನಿಧಿ ಪಾತ್ರದ ಮೂಲಕ ಜನ ಮನ ಗೆದ್ದ ನಟಿ, ಬಿಗ್ ಬಾಸ್ ಮೂಲಕ ಇನ್ನಷ್ಟು ಜನಪ್ರಿಯತೆಯನ್ನು ಪಡೆದುಕೊಂಡ ನಟಿ ವೈಷ್ಣವಿ ಗೌಡ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಸೀತಾ ರಾಮ ಸೀರಿಯಲ್ ನ ಪ್ರೊಮೋ ಬಿಡುಗಡೆ ಆಗಿ ಆರು ತಿಂಗಳಿಗೂ ಹೆಚ್ಚಿನ ಕಾಲವಾಗಿದ್ದರೂ, ಸೀರಿಯಲ್ ಮಾತ್ರ ಇನ್ನೂ ಯಾವಾಗ ಎನ್ನುವುದೇ ಪ್ರಶ್ನೆಯಾಗಿದೆ.

ಕಿರುತೆರೆಯಲ್ಲಿ ಜನಪ್ರಿಯತೆ ಪಡೆದಿರುವ ಖಾಸಗಿ ವಾಹಿನಿ ಜೀ ಕನ್ನಡ ಹೊಸ ಸೀರಿಯಲ್ ಗಳ ಪ್ರೊಮೋವನ್ನು ಪ್ರಸಾರ ಮಾಡಿತ್ತು. ಅವುಗಳಲ್ಲಿ ಭೂಮಿಗೆ ಬಂದ ಭಗವಂತ, ಶ್ರೀರಸ್ತು, ಶುಭಮಸ್ತು ಮತ್ತು ಅಮೃತಧಾರೆ ಸೀರಿಯಲ್ ಗಳು ಆರಂಭವಾಗಿದ್ದು , ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಆದರೆ ಸೀತಾ ರಾಮ ಸೀರಿಯಲ್ ಮಾತ್ರ ಇನ್ನೂ ಆರಂಭವಾಗಿಲ್ಲ ಮತ್ತು ಆರಂಭದ ಸೂಚನೆಗಳು ಸಹಾ ಕಾಣುತ್ತಿಲ್ಲ.

ಸತ್ಯ ಸೀರಿಯಲ್ ನಿರ್ದೇಶನ ಮಾಡುತ್ತಿರುವ ಸ್ವಪ್ನ ಕೃಷ್ಣ ಅವರ ನಿರ್ದೇಶನದಲ್ಲಿ ಈ ಹೊಸ ಸೀರಿಯಲ್ ಸಹಾ ಮೂಡಿ ಬರಲಿದೆ. ಆದರೆ ಸೀರಿಯಲ್ ಪ್ರಸಾರ ಹೀಗೆ ತಡ ಆಗ್ತಾ ಇರೋದು ಯಾಕೆ ಅನ್ನೋದು ಪ್ರಶ್ನೆ. ಸುದ್ದಿಗಳ ಪ್ರಕಾರ ಸೀರಿಯಲ್ ನ ರೀ ಶೂಟ್ ಮಾಡಲಾಗುತ್ತಿದೆ ಎನ್ನಲಾಗಿದೆ. ಹೊಸ ಪ್ರೊಮೋಗಳನ್ನು ಸಹಾ ಶೂಟ್ ಮಾಡ್ತಿದ್ದಾರೆ ಎಂದು ಸಹಾ ಹೇಳಲಾಗ್ತಿದೆ. ಇದೇ ಕಾರಣದಿಂದಾಗಿ ಸೀರಿಯಲ್ ಪ್ರಸಾರ ತಡವಾಗ್ತಿದೆ ಎಂದು ಹೇಳಲಾಗಿದೆ.

ಪ್ರೋಮೋ ಪ್ರಸಾರ ಕಂಡ ದಿನದಿಂದಲೂ ಸಹಾ ಪ್ರೇಕ್ಷಕರು ಸೀರಿಯಲ್ ಯಾವಾಗ ? ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ. ಅಲ್ಲದೇ ನಟಿ ವೈಷ್ಣವಿ ಗೌಡ ಅವರು ಬಿಗ್ ಬಾಸ್ ನಂತರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸೀರಿಯಲ್ ಇದಾಗಿದೆ. ಅವರ ಅಭಿಮಾನಿಗಳು ಸೀರಿಯಲ್ ಗಾಗಿ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಸೀರಿಯಲ್ ಕುರಿತಾದ ಹೊಸ ಅಪ್ಡೇಟ್ ಸಿಗಬಹುದು ಎನ್ನಲಾಗುತ್ತಿದೆ.

Related posts

ಇನ್ಮುಂದೆ ವಾರಾಂತ್ಯದಲ್ಲಿ ನಾನ್ ವೆಜ್ ಪ್ರಿಯರಿಗಾಗಿ ಬರಲಿದೆ”ಬೊಂಬಾಟ್ ಬಾಡೂಟ”

ಕಿರುತೆರೆಯಲ್ಲಿ ಶುರುವಾಗ್ತಿದೆ ಸೆಲೆಬ್ರಿಟಿಗಳ ಬಹುದೊಡ್ಡ ಸಮರ “ಸುವರ್ಣ ಸೆಲೆಬ್ರಿಟಿ ಲೀಗ್” ಇದೇ ಭಾನುವಾರದಿಂದ ರಾತ್ರಿ 7 ಗಂಟೆಗೆ

ಕಿರುತೆರೆಗೆ ಭರ್ಜರಿ ಕಮ್ ಬ್ಯಾಕ್ ಮಾಡಿದ 90ರ ದಶಕದ ಜನಪ್ರಿಯ ಬಾಲನಟಿ ಸಿಂಧೂ ರಾವ್

This website uses cookies to improve your experience. We'll assume you're ok with this, but you can opt-out if you wish. Read More