Home » ಶುಕ್ರವಾರ ನಮಾಜ್ ಮಾಡಲು ಅವಕಾಶ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ

ಶುಕ್ರವಾರ ನಮಾಜ್ ಮಾಡಲು ಅವಕಾಶ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ

by Suddi Mane
0 comment

ಪ್ರತಿ ಶುಕ್ರವಾರ ನಮಾಜ್ ಗೆ ಒಂದು ಗಂಟೆ ಮೀಸಲು ಹಾಗೂ ರಂಜಾನ್ ತಿಂಗಳಲ್ಲಿ ಅರ್ಧ ಗಂಟೆ ಬೇಗ ಹೊರಡಲು ಅನುಮತಿಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಸ್ಥೆ ಮನವಿಯೊಂದನ್ನು ಮಾಡಿಕೊಂಡಿದೆ. ಭಾನುವಾರ ಈ ಮನವಿ ಪತ್ರವನ್ನು ಸಚಿವ ರಹೀಮ್ ಖಾನ್ ಅವರಿಗೆ ಸಲ್ಲಿಕೆ ಮಾಡಲಾಗಿದೆ. ಇದರ ಜೊತೆಗೆ ಇನ್ನೂ ಹಲವು ಬೇಡಿಕೆಗಳನ್ನು ಕರ್ನಾಟಕ ರಾಜ್ಯ ಮುಸ್ಲಿಂ ಸರಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಸ್ಥೆ ಸರಕಾರದ ಮುಂದೆ ಇಟ್ಟಿದೆ.

ಶುಕ್ರವಾರದ ಪ್ರಾರ್ಥನೆಗೆ ಒಂದು ಗಂಟೆಯ ಅವಕಾಶ ಹಾಗೂ ರಂಜಾನ್ ತಿಂಗಳಲ್ಲಿ ಅರ್ಧ ಗಂಟೆ ಬೇಗ ಹೋಗುವ ಅವಕಾಶವು ಕೇಂದ್ರ ಸರ್ಕಾರದ ಆದೇಶದಲ್ಲಿದೆ. ಆದರೆ ಈ ಆದೇಶವು ಹಳೆಯದಾಗಿದ್ದು, ಅದನ್ನು ಮತ್ತೆ ಪರಿಶೀಲನೆ ಮಾಡುವಂತೆ ಕರ್ನಾಟಕ ರಾಜ್ಯ ಸರಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಬ್ದುಲ್ ರಹೀಮ್ ಅವರು ಹೇಳಿದ್ದಾರೆ. ಇದೇ ವೇಳೆ ಈ ಸಂಘ ಇಟ್ಟಿರುವ ಇತರೆ ಬೇಡಿಕೆಗಳೇನು? ಎನ್ನುವುದನ್ನು ತಿಳಿಯೋಣ.

ಕ್ರಿಯಾಶೀಲ ಅಧಿಕಾರಿ, ಉದ್ಯೋಗಿಯನ್ನು ಗುರುತಿಸಿ, ಅವರಿಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಸನ್ಮಾನವನ್ನು ಉತ್ತೇಜಿಸುವುದು.
ಡಿಸೆಂಬರ್ 18 ರಂದು, ಪುನಃ ಅಲ್ಪಸಂಖ್ಯಾತರ ದಿನಾಚರಣೆಗೆ ಅವಕಾಶವನ್ನು ನೀಡುವುದು.
1 ರಿಂದ 8 ನೇ ತರಗತಿ ಮಕ್ಕಳಿಗೆ ನೀಡಲಾಗುವ ಎನ್​ಪಿಎಸ್​ ವಿದ್ಯಾರ್ಥಿ ವೇತನವನ್ನು ಆರಂಭಿಸುವುದು.
ಕೆಪಿಎಸ್​ಸಿ ತಜ್ಞರ ಸಮಿತಿಯಲ್ಲಿ ಅಲ್ಪಸಂಖ್ಯಾತ ಸಮುದಾಯದ ತಜ್ಞರನ್ನು ಪರಿಗಣಿಸುವುದು.
ಕರ್ನಾಟಕ ಉರ್ದು ಅಕಾಡೆಮಿಗೆ ಅಧ್ಯಕ್ಷರನ್ನುವ ನೇಮಿಸುವುದು.

ಸಂಘದಿಂದ ಮನವಿಯನ್ನು ಸ್ವೀಕರಿಸಿರುವ ಸಚಿವ ರಹೀಮ್ ಖಾನ್ ಅವರು ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ, ಸಮುದಾಯದ ಎಲ್ಲಾ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವುದಕ್ಕಾಗಿ ಸರ್ಕಾರವು ಬದ್ಧವಾಗಿದೆ. ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರದ ಮುಂದೆ ಇರಿಸಲಾಗುವುದು ಎಂದು ಸಚಿವ ರಹೀಮ್ ಅವರು ಭರವಸೆಯನ್ನು ನೀಡಿದ್ದಾರೆ.

You may also like

Leave a Comment

ಸಮಗ್ರ ಸುದ್ದಿಗಳ ಆಗರ
ವಿಶೇಷ ಮಾಹಿತಿಗಳ ಸಂಚಾರ
ಸುದ್ದಿಮನೆ ಇದು ತಾಜಾ ಸಮಾಚಾರ

Edtior's Picks

Latest Articles

&copy 2023 by Suddi Mane. All rights reserved.

This website uses cookies to improve your experience. We'll assume you're ok with this, but you can opt-out if you wish. Accept Read More

Adblock Detected

Please support us by disabling your AdBlocker extension from your browsers for our website.
Designed & developed by Crisant Technologies